ನೀನೆಂಬ ಬಯಕೆ ನನ್ನೀ ಹರಿವಿನ ಒಳಗೆ ಮೊಳಕೆಯೊಡೆಯುವ ಮೊದಲೇ ಚಿವುಟಿಬಿಡಲೇ? ಏಕೆ ಹೇಳು?
ಮೋಡ ಬಂದು ಮರೆಯಾಗುವ ಬದಲು ಬರದಿರುವುದೇ ಒಳಿತು. ಮೇಲಾಗಿ ಜತನದಿಂದ ಕಾಪಿಟ್ಟ ಮನಸಲ್ಲ
ಇದು, ಒಡೆದುಹೋಗುವುದು ಎರಡೇ ಎರಡು ಕಣ್ಣಹನಿ ಬಿದ್ದರೂ. ರಭಸಕ್ಕೆ ಬಾಗದ ಬಗೆಯನ್ನೂ
ಕಲಿಸಿಲ್ಲ ಇದಕೆ, ನಿನ್ನುಸಿರ ಗಾಳಿಗೆ ಹಾಗೇ ಹಾರಿಹೋದೀತು! ಗೊತ್ತಿದೆ ನಾಳೆಯೆಂಬುದಿದೆ
ಇಂದು ಕಳೆದರೆ, ಕಾಯುವೆ ಕಣ್ಮುಚ್ಚಿ. ಕಲಿಸುವೆ ಕಸರತ್ತ ಮನಕೆ, ಚಿಗುರ ಚೂಟುವ ಕೆಲಸ
ಸುಲಭದ್ದಲ್ಲ ನೋಡು! ಬೇಕೆಂದು ಮಾಡುವುದಲ್ಲ, ಸಹಜ ಸ್ವಾರ್ಥವೆಂದುಕೋ ಮತ್ತು ಅಗತ್ಯ.
ಕವನವಿದು, ಕಟ್ಟು ಕಥೆಯಲ್ಲ, ಕವನ. ಅಳುಕು, ಪ್ರತೀ ಸಾಲಿನ ತುದಿಗೆ ನಿಂತ ನೀನು ಹಾಗೇ
ಜಾರಿಹೋಗದಿರಲೆಂದು ಜಾಗ ಬಿಡದೇ ಬರೆದಿರುವೆ ಅಷ್ಟೇ. ಕಡೆಯ ಸಾಲಿನ ಕೊನೆಯಿದು. ಇದೇ
ಕೊನೆ. ನಾ ಬೇರೆ ನೀ ಬೇರೆ.
(July 1st 2017)
(July 1st 2017)